ಜನದನಿಯ ಜಾಗೃತಿ ಕಾರ್ಯಕ್ರಮವನ್ನು ಪ್ರಪ್ರಥಮ ಬಾರಿಗೆ ನಮ್ಮ ರಾಜ್ಯದ ಗಡಿಯಿಂದಾಚೆಗೆ ಮಹಾರಾಷ್ಟ್ರದ ಥಾಣೆ (ಮುಂಬಯಿ)ಯ ಮೀರಾ ರೋಡಿನ ಸಿಲ್ವರ್ ಸರಿತ ಮಹಿಳಾ ಮಂಡಳಿಯ ಆಶ್ರಯದಲ್ಲಿ ದಿನಾಂಕ 24 Jan 2016 ರಂದು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಜನದನಿಯ ಸದಸ್ಯರಾದ ಸರಳಾ ಪ್ರಕಾಶ್, ಜಯಲಕ್ಷ್ಮೀ ಪಾಟೀಲ್ ಹಾಗೂ ಆತ್ರಾಡಿ ಸುರೇಶ ಹೆಗ್ಡೆ ಭಾಗವಹಿಸಿದ್ದರು.
For the very first time JANADANI awareness program was organised across the state border at Silver Sarita Mahila Mandali in Meera Road, Thane (Mumbai). Janadani members who participated in the program are Sarala Prakash, Jayalaxmi Patil and Athradi Suresh Hegde.
Jayashree Deshpande
says on:ನಿರಂತರ ಬದಲಾಗುತ್ತಿರುವ ನಮ್ಮ ಸಮಾಜವ್ಯವಸ್ಥೆಯಲ್ಲಿ ಅಪಾಯಗಳನ್ನು ಅಡಿಗಡಿಗೂ ಎದುರಿಸಿ ಬೆಳೆಯಬೇಕಿರುವ ಮಕ್ಕಳ ಸಹಾಯಕ್ಕೆ ಕೈ ಚಾಚಿರುವ ಜನದನಿಯ ಧ್ವನಿ ಕನಾ೯ಟಕದ ಗಡಿಯಾಚೆಗೂ ಹರಿದು ಜನಮಾನಸದಲ್ಲಿ ಮುನ್ನೆಚ್ಚರಿಕೆಯ ಸಂದೇಶವನ್ನು ಬಿತ್ತುತ್ತಿದೆ. ಜನದನಿಗೆ ಸಕಲ ಯಶಸ್ಸು ದೊರಕಲೆಂದು ಹಾರೈಸುತ್ತೇನೆ.
admin
says on:ತಮ್ಮ ಶುಭಹಾರೈಕೆಗಳಿಗಾಗಿ ಹೃತ್ಪೂರ್ವಕ ಧನ್ಯವಾದಗಳು. ತಮ್ಮೆಲ್ಲರ ಬೆಂಬಲ ಮತ್ತು ಪ್ರೋತ್ಸಾಹ ಸತತವೂ ಹೀಗೆಯೇ ಇರಲಿ.
ಸ್ವರ್ಣಾ
says on:ಜನದನಿಯ ಕಾರ್ಯಕ್ರಮಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳಲು ದ್ವಾರ ತೆರೆದಿದ್ದೀರಿ . ಶುಭಾಶಯಗಳು. ಮುಂಬರುವ ಕಾರ್ಯಕ್ರಮಗಳ ಬಗ್ಗೆ ಇಲ್ಲಿ ತಿಳಿಸಬಹುದೇ ?
admin
says on:ಧನ್ಯವಾದಗಳು. ಖಂಡಿತ. ಮಾರ್ಚ್ ತಿಂಗಳಲ್ಲಿ ಜನದನಿ ತಂಡ ತಯಾರಿಸಿದ ಕಿರುಚಿತ್ರಗಳ ಪ್ರದರ್ಶನವಿರುತ್ತದೆ, ಇದೇ ವರ್ಷದಲ್ಲಿ ಶಾಲೆ ಮತ್ತು ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಹಲವು ಸ್ಪರ್ಧೆಗಳನ್ನು ಜನದನಿ ಏರ್ಪಡಿಸಲಿದೆ ಹಾಗೂ ಎಂದಿನಂತೆ ಜಾಗೃತಿ ಕಾರ್ಯಾಗಾರಗಳು ಮುಂದುವರೆಯುತ್ತವೆ.
Mallikarjun L. Shivakeri
says on:ನಿರಂತರ ಬದಲಾಗುತ್ತಿರುವ ನಮ್ಮ ಸಮಾಜವ್ಯವಸ್ಥೆಯಲ್ಲಿ ಅಪಾಯಗಳನ್ನು ಅಡಿಗಡಿಗೂ ಎದುರಿಸಿ ಬೆಳೆಯಬೇಕಿರುವ ಮಕ್ಕಳ ಸಹಾಯಕ್ಕೆ ಕೈ ಚಾಚಿರುವ ಜನದನಿಯ ಧ್ವನಿ ಕನಾ೯ಟಕದ ಗಡಿಯಾಚೆಗೂ ಹರಿದು ಜನಮಾನಸದಲ್ಲಿ ಮುನ್ನೆಚ್ಚರಿಕೆಯ ಸಂದೇಶವನ್ನು ಬಿತ್ತುತ್ತಿದೆ. ಜನದನಿಗೆ ಸಕಲ ಯಶಸ್ಸು ದೊರಕಲೆಂದು ಹಾರೈಸುತ್ತೇನೆ.